ಉಪ್ಪಿನಂಗಡಿ : SSF ತೆಕ್ಕಾರು ಯುನಿಟ್ ಇದರ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುವ ಅನುಸ್ಮರಣಾ ಸಂಗಮವು ದಿನಾಂಕ 8/11/19 ಶುಕ್ರವಾರ ಸಂಜೆ 7ಕ್ಕೆ ಮರ್ಹೂಂ ಶರಫುಲ್ ಉಲಮಾ ವೇದಿಕೆ, ಬದ್ರಿಯಾ ಜುಮ್ಮಾ ಮಸ್ಜಿದ್ ವಠಾರ ತೆಕ್ಕಾರು ನಲ್ಲಿ ಅತೀ ವಿಜೃಂಭಣೆಯಿಂದ ನಡೆಯಿತು.
BJM ತೆಕ್ಕಾರು ಅಧ್ಯಕ್ಷ MT ಆದಂ ಬಾಜಾರ ಅಧ್ಯಕ್ಷತೆ ವಹಿಸಿದರು, SYS ತೆಕ್ಕಾರು ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸಹದಿ ತೆಕ್ಕಾರು ಉದ್ಘಾಟಿಸಿದರು.
ಸ್ಥಳೀಯ ಖತೀಬ್ ಅಬ್ದುಲ್ ರವೂಫ್ ಅಹ್ಸನಿ ಕಾಸರಗೋಡು ಪ್ರಾಸ್ತಾವಿಕ ಬಾಷಣಗೈದರು.
ಯುವವಾಗ್ಮಿ ಅತಾವುಲ್ಲಾ ಹಿಮಮಿ ಸಖಾಫಿ ಕುಪ್ಪೆಟಿ ಮುಖ್ಯ ಪ್ರಬಾಷಣಗೈದರು.
ಮಹಲರತ್ತುಲ್ ಬದ್ರಿಯಾ ಮಜ್ಲೀಸ್ ಗೆ ನವಾಝ್ ಮುಸ್ಲಿಯಾರ್ ಕಕ್ಕೆಪದವು, ನೌಷಾದ್ ಹಿಮಮಿ ಚಾರ್ಮಾಡಿ ನೇತೃತ್ವ ನೀಡಿದರು, ಶಾಖಾ ಅಧ್ಯಕ್ಷ ನೌಫಲ್ TH,
ಸ್ಥಳೀಯ ಮದ್ರಸಾ ಪ್ರಿನ್ಸಿಪಾಲ್ ಇಸಾಕ್ ಮದನಿ ಅಳಕ್ಕೆ,ಇಸಾಕ್ ಝುಹ್ರಿ,
ಅತಾವುಲ್ಲ TH,ಹನೀಫ್ ಮುಸ್ಲಿಯಾರ್ ಕನರಾಜೆ-ಕಚ್ಚೇರಿ,ಅಬ್ದುಲ್ ರಝಾಕ್ ಬೈಲಮೇಲು,SSF ಸರಳಿಕಟ್ಟೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಕೀಮ್ ಜೋಗಿಬೆಟ್ಟು, ಹಾಗು ಮತ್ತಿತ್ತರು ಉಪಸ್ಥಿತರಿದ್ದರು.
SSF ಉಪ್ಪಿನಂಗಡಿ ಡಿವಿಷನ್ ಸದಸ್ಯ ಬಾತಿಶ್ ಕೆ,ಪಿ ತೆಕ್ಕಾರು ಸ್ವಾಗತಿಸಿ,
ಯುನಿಟ್ ಪ್ರಧಾನ ಕಾರ್ಯದರ್ಶಿ ಲತೀಫ್ ಕೆ,ಪಿ ವಂದಿಸಿದರು.