ಚಿತ್ರದುರ್ಗ: ಮಿಲಾದುನ್ನಬಿ ಪ್ರಯುಕ್ತ ಚಿತ್ರದುರ್ಗದಲ್ಲಿ ಬೃಹತ್ ಮಿಲಾದ್ ಕಾನ್ಫರೆನ್ಸ್ ಬುರ್ದಾ ಮಜ್ಲಿಸ್ ನಡೆಸಲಾಯಿತು.
ಕೇರಳದಿಂದ ಬಂದ ಇಲಲ್ ಹಬೀಬ್ ಬುರ್ದಾ ಇಖ್ವಾನ್ ಬುರ್ದಾ ಮಜ್ಲಿಸ್ ಮತ್ತು ನಾತ್ ಮಹ್ಫಿಲಿಗೆ ನೇತೃತ್ವ ನೀಡಿದರು. ಹಾಫಿಝ್ ಆದಮ್ ಹಝ್ರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಎಂಎಸ್ಎಂ ಜುನೈದ್ ಸಖಾಫಿ ಮೀಲಾದುನ್ನಬಿ ಸಂದೇಶ ನೀಡಿದರು. ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಕಾರ್ಯದರ್ಶಿ ಅಡ್ವಕೇಟ್ ಝುಲ್ಫೀಕರ್ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು ಮತ್ತು ಕೊನೆಯದಾಗಿ ವಂದನೆ ಅರ್ಪಿಸಿದರು.