janadhvani

Kannada Online News Paper

ಹರಂ ಶರೀಫಿನಲ್ಲಿ ಭಿಕ್ಷಾಟನೆ-ವ್ಯಕ್ತಿಯ ಬಂಧನ

ಮಕ್ಕಾ: ಮಕ್ಕಾದ ಪವಿತ್ರ ಹರಂ ಮಸೀದಿಯಿಂದ ಭಿಕ್ಷುಕನನ್ನು ಸೆರೆಹಿಡಿಯಲಾಗಿದ್ದು, ಆತನಿಂದ, ಭದ್ರತಾ ತಂಡವು ಸುಮಾರು ಐದಾರು ಲಕ್ಷ ಭಾರತೀಯ ರೂಪಾಯಿಗಳಿಗೆ ಸಮಾನವಾದ 31,000 ರಿಯಾಲ್ಗಳನ್ನು ಕಂಡುಹಿಡಿಯಲಾಗಿದೆ. ಯಾತ್ರಿಕರು ಮತ್ತು ಹರಮ್‌ಗೆ ಭೇಟಿ ನೀಡುವವರ ಬಳಿ ಸಹಾಯ ಬೇಡುತ್ತಿದ್ದ ಭಿಕ್ಷುಕನನ್ನು ಹರಮ್ ಭದ್ರತಾ ಘಟಕ ವಶಕ್ಕೆ ಪಡೆದುಕೊಂಡಿದೆ.

ಮುಂದಿನ ಕ್ರಮಕ್ಕಾಗಿ ಹರಮ್ ಭದ್ರತಾ ಇಲಾಖೆಯು ಭಿಕ್ಷುಕನನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಿದೆ. ಪವಿತ್ರ ಹರಮ್ ವಲಯವು ಭಿಕ್ಷಾಟನೆ ನಿಷೇಧಿತ ವಲಯವಾಗಿದೆ. ಹರಮ್ನಲ್ಲಿ ಭಿಕ್ಷಾಟನೆ ಮಾಡದಂತೆ ಅಧಿಕಾರಿಗಳು ಆಗಾಗ್ಗೆ ಎಚ್ಚರಿಕೆ ನೀಡಿದ್ದಾರೆ. ಭಿಕ್ಷಾಟನೆ ಮಾಡುವವರನ್ನು ಅಧಿಕಾರಿಗಳು ಬಂಧಿಸುತ್ತಾರೆ.

ಹರಮ್ ಭದ್ರತಾ ವಿಭಾಗದ ಸಹಾಯಕ ನಿರ್ದೇಶಕ ಕರ್ನಲ್ ಡಾ.ಬದ್ರ್ ಬಿನ್ ಸ‌ಊದ್, ಹರಮ್ ಭದ್ರತಾ ಅಧಿಕಾರಿ ಅಲಿ ಬಿನ್ ಆಯಿಲ್ ಅಸ್ಸಹ್ರಾನಿ ಅವರನ್ನು ಗೌರವಿಸಿದರು. ನಂತರ ಮಾತನಾಡಿದ ಅವರು, ಪವಿತ್ರ ಹರಮ್ನಲ್ಲಿ ಸೇವೆ ಸಲ್ಲಿಸುತ್ತಿರುವ ನಿಮ್ಮಂತಹವರು ನಮ್ಮ ಅಭಿಮಾನ ಎಂದು ಹೇಳಿದರು.

error: Content is protected !! Not allowed copy content from janadhvani.com