ಕರ್ನಾಟಕ್ ಕಲ್ಚರಲ್ ಫೌಂಡೇಶನ್ ಯು ಎ ಇ ರಾಷ್ಟ್ರೀಯ ಸಮೀತಿ ಪ್ರತೀ ವರ್ಷ ನಡೆಸಿ ಬರುತಿರುವ ಪ್ರತಿಭೆಗಳ ಸಾಂಸ್ಕೃತಿಕ ಹಬ್ಬ
ಪ್ರತಿಭೋತ್ಸವ 2020 ಗೆ ಚಾಲನೆ ನೀಡಲಾಯಿತು , “ಅರಿವಿನ ಕ್ರಾಂತಿಗೆ ಪ್ರತಿಭೆಗಳ ನಡಿಗೆ ” ಎನ್ನುವ
ಶಿರ್ಷಿಕೆಯಲ್ಲಿ ನಡೆಯುವ ಪ್ರತಿಭೋತ್ಸವದ ಲಾಂಛನವನ್ನು ಸಯ್ಯದ್ ಫಝಲ್ ಕೋಯಮ್ಮ ತಂಗಳ್ ಕೂರತ್ ರವರು ಬಿಡುಗಡೆ ಮಾಡಿದರು .
ವಿವಿಧ ಎಮಿರೇಟ್ ಗಳಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಸ್ಪರ್ಧೆಯ
ವಿಜೇತ ಸ್ಪರ್ಧಾರ್ಥಿಗಳ ಗ್ರಾಂಡ್ ಫೈನಲ್ ಕಾರ್ಯಕ್ರಮ 03 ಜನವರಿ 2020 ರಂದು ಅಬು ಧಾಬಿಯ ಸುಸಜ್ಜಿತ ಬ್ರಹತ್ ಸಭಾಂಗಣಧಲ್ಲಿ ನಡೆಯಲಿದೆ , 50ಕ್ಕೂ ಮಿಕ್ಕ ವಿವಿದ ಸ್ಪರ್ಧಾ ವಿಷಯಗಳಲ್ಲಿ 1000ಕ್ಕೂ ಮಿಕ್ಕ ಪ್ರತಿಭೆಗಳು ಸ್ಪರ್ಧಿಸಲಿದ್ಧಾರೆ ,ಪ್ರತಿ ಎಮಿರೇಟ್ಸ್ ನಲ್ಲಿ ಕೆಸಿಎಫ್ ಝೋನಲ್ ಮಟ್ಟದ ಸ್ಪರ್ದೆಗೆ ಈಗಾಗಲೇ ನೋಂದಾವಣಿ ಆರಂಬವಾಗಿದೆ ಸಬ್ ಜೂನಿಯರ್,ಜೂನಿಯರ್ ,
ಸೀನಿಯರ್ ಬಾಯ್ಸ್, ಸೀನಿಯರ್ ಗರ್ಲ್ಸ್, ಜನರಲ್ ಮೇಲ್,
ಜನರಲ್ ಫೀಮೇಲ್ ವಿಭಾಗಗಳಲ್ಲಿ ಕಿರಾತ್ , ಹಾಡು ,ಭಾಷಣ ,ರಸ ಪ್ರಶ್ನೆ ಮೆಮೊರಿ ಟೆಸ್ಟ್ , ಕಸದಿಂದ ರಸ ,ಚರಿತ್ರೆ ಬರಹ , ಅರೇಬಿಕ್ ಕ್ಯಾಲಿಗ್ರಫಿ ,ಬುರ್ದಾ ,ದಫ್ಫ್ ,ಪ್ರಬಂಧ ,ಇತ್ಯಾಧಿ ಸ್ಪರ್ಧೆಗಳು ನಡೆಯಳಿದ್ದು.
ಯುಎಇ ಯಾದ್ಯಂತ ನೆಲೆಸಿರುವ ಕನ್ನಡಿಗರಲ್ಲಿ ನೋಂದಾಯಿಸಲು ಸಂಘಟಕರು ತಿಳಿಸಿದ್ದಾರೆ.
ಪ್ರತಿಭೋತ್ಸವ ಸಮಿತಿ ಸಂಚಾಲಕರಾದ ಬ್ರೈಟ್ ಮಾರ್ಬಲ್ ಇಬ್ರಾಹಿಂ ,ಕನ್ವಿನರ್ ಇಕ್ಬಾಲ್ ಕಾಜೂರ್ , ಡಾ. ಶೇಕ್ ಭಾವ , ಪಿ ಎಂ ಹೆಚ್ ಹಮೀದ್ ,ಹಮೀದ್ ಸಅದಿ, ಹಸೈನಾರ್ ಅಮಾನಿ , ಹಕೀಮ್ ತುರ್ಕಳಿಕೆ ಉಪಸ್ಥಿತರಿದ್ದರು .
ಸಂಪರ್ಕಿಸಲು +971 55 768 7004