janadhvani

Kannada Online News Paper

SYS ಚೆನ್ನಾವರ ಬ್ರಾಂಚ್: ನೂತನ ಸಾರಥಿಗಳು

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ಚೆನ್ನಾವರ ಬ್ರಾಂಚ್ ಇದರ ನೂತನ ಅಧ್ಯಕ್ಷರಾಗಿ ಇಸ್ಮಾಈಲ್ ಸಅದಿ , ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್, ಕೋಶಾಧಿಕಾರಿಯಾಗಿ ಅಬ್ದುಲ್ ರಝಾಕ್ ಹಾಜಿಯವರು ಆಯ್ಕೆಗೊಂಡರು.

28/9/19 ರಂದು ಅಬ್ದುಲ್ ಕರೀಮ್ ಹಾಜಿರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆಮಾಡಲಾಯ್ತು. ಸಿಪಿ ಅಬೂಬಕರ್ ಮದನಿ ಪ್ರಾರ್ಥನೆಗೈದರು. ಇಸ್ಮಾಈಲ್ ಹನೀಫಿ ರವರು ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಅಧ್ಯಕ್ಷ ಅಮೀನ್ ಝುಹ್ರಿ ಸಅದಿ ಶುಭ ಹಾರೈಸಿದರು. ಕುಂಬ್ರ ಸೆಂಟರ್ ಎಸ್ ವೈಎಸ್ ಚುಣಾವನಾ ವೀಕ್ಷಕ ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು.
ನೂತನ ಸಮಿತಿಗೆ ಈ ಕೆಳಗಿನವರನ್ನು ಆಯ್ಕೆ ಮಾಡಲಾಯ್ತು.

ಇಸ್ಮಾಈಲ್ ಸಅದಿ (ಅಧ್ಯಕ್ಷ ), ಅಬ್ದುರ್ರಹ್ಮಾನ್ ಮುಕ್ಕೂರು (ಉಪಾಧ್ಯಕ್ಷ ), ಅಬ್ದುಲ್ ಅಝೀಝ್ (ಪ್ರ.ಕಾರ್ಯದರ್ಶಿ ), ಅಬ್ಬಾಸ್ ಎನ್, ಅಬ್ದುಲ್ ಖಾದರ್ (ಕಾರ್ಯದರ್ಶಿ ) ಅಬ್ದುಲ್ ರಝಾಕ್ ಹಾಜಿ (ಕೋಶಾಧಿಕಾರಿ).ಅಬ್ದುಲ್ ಕರೀಮ್ ಹಾಜಿ , ಸಿಪಿ ಅಬೂಬಕರ್ ಮದನಿ, ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ, ಅಬ್ದುಸ್ಸತ್ತಾರ್, ಅಬ್ದುರ್ರಹ್ಮಾನ್ ಬಿ, ಅಬ್ದುಲ್ಲ ಪಿವಿ , ಮುಹಮ್ಮದ್ ಕೆ, ಇಸ್ಮಾಈಲ್ ಹೊಸಮನೆ, ಹನೀಫ್ ಇಂದ್ರಾಜೆ (ಸದಸ್ಯರು ) ಅಬ್ದುಲ್ ಅಝೀಝ್ ಚೆನ್ನಾರ್ ಸ್ವಾಗತಿಸಿ ವಂದಿಸಿದರು.