janadhvani

Kannada Online News Paper

ಯಾತ್ರಭಾರತ್ ಹಾಗೂ ಅವರ್ ಬುಕ್ಸ್ ಕಛೇರಿ ಉದ್ಘಾಟನೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಹಜ್ಜ್ ಮತ್ತು ಉಮ್ರಾ ಸೇವೆ ಯನ್ನು ಒದಗಿಸುವ “ಯಾತ್ರಾಭಾರತ್” ಮತ್ತು ಕೆ ಸಿಎಫ್ ಪ್ರಕಾಶನ ಸಂಸ್ಥೆ ಯ ‘ಅವರ್ ಬುಕ್ಸ್ ‘ ಇದರ ಮಂಗಳೂರು ನಗರ ಕಛೇರಿಯನ್ನು ನಗರದ ಸ್ಟೇಟ್ ಬ್ಯಾಂಕ್ ಹತ್ತಿರ ದ ಅಲ್ ರಬಾ ಪ್ಲಾಜ ದಲ್ಲಿ ಮಲ್ಜಹ್ ಸಾರಥಿ ಅಸ್ಸೈಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ತಂಙಲ್ ಉಜಿರೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಂ ಮಮ್ತಾಜ್ ಅಲಿ, ಲೈನ್ ಪಳ್ಳಿ ಮಸೀದಿ ಖತೀಬ್ ಕಾಸಿಂ ಮುಸ್ಲಿಯಾರ್, ಕೆ ಸಿ ಎಫ್ ಸೌದಿ ನಾಯಕ ಪಿ ಪಿ ನಝೀರ್ ಕಾಶಿಪಟ್ನ, ಕೆಸಿಎಫ್ ಪ್ರಕಾಶನ ವಿಭಾಗದ ಅಧ್ಯಕ್ಷ ಅಬ್ದುಲ್ ಹಮೀದ್ ಬಜ್ಪೆ, SჄS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು, SSF ಜಿಲ್ಲಾ ನಾಯಕ ರಾದ ಇಬ್ರಾಹಿಂ ಸಖಾಫಿ ಸೆರ್ಕಲ, ಶರೀಪ್ ನಂದಾವರ, ಹಸನ್ ಪಾಂಡೇಶ್ವರ, ಅಬ್ಡುಲ್ ಜಬ್ಬಾರ್ ಕಣ್ಣೂರು,ಮನ್ಸೂರು ಬಜಾಲ್, ನಿಝಾಮ್ ಮಂಗಳೂರು.ಕಛೇರಿ ಕಾರ್ಯದರ್ಶಿ ಅಬೂಸಾಲಿಹ್ ಪಾವೂರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com