janadhvani

Kannada Online News Paper

ತೀರ್ಥಹಳ್ಳಿ ಎಸ್ಸೆಸ್ಸೆಫ್ ನೊಣಬೂರು ಶಾಖೆಯಿಂದ ಧ್ವಜ ದಿನಾಚರಣೆ

ತೀರ್ಥಹಳ್ಳಿ : ಎಸ್ಸೆಸ್ಸೆಫ್ ನೊಣಬೂರು ಶಾಖೆ ಧ್ವಜ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಸ್ಥಳೀಯ ಜಮಾಅತ್ ಅಧ್ಯಕ್ಷ ಮುಸ್ತಫಾ ರವರು ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಶಾಖ ಕಾರ್ಯದರ್ಶಿ ಝಾಕಿರ್ ರವರು ಸ್ವಾಗತ ಕೋರಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಮುಅಲ್ಲಿಂ ನೌಫಳ್ ಸಅದಿ ನೆರವೇರಿಸಿದರು.
ಸ್ಥಳೀಯ ಖತೀಬ್ ಉಸ್ತಾದ್ ಮುಹಮ್ಮದ್ ಅನ್ಸಾರ್ ಸಅದಿ ಬೆಳಂದೂರು ಸಂದೇಷ ಭಾಷಣ ಹಾಗೂ ದುಆ ನೆರವೇರಿಸಿದರು.

ಜಮಾಅತ್ ನಾಯಕರು, ಸದಸ್ಯರು SSF ನೊಣಬೂರು ಶಾಖೆಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮದರಸ ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಖೆ ಸದಸ್ಯ ರಾಝಿಕ್ ರವರು ವಂದಿಸಿ ಸಿಹಿತಿಂಡಿ ಹಂಚಲಾಯಿತು.

ವರದಿ : ಪಿ ಎಂ ಎಸ್ ಪಡುಬಿದ್ರಿ

error: Content is protected !! Not allowed copy content from janadhvani.com