ಬೆಳ್ತಂಗಡಿ: ಬದ್ಯಾರ್ ಇಲ್ಲಿನ ಸಮೀಪದ ಗುರುವಾಯನಕೆರೆ, ಬದ್ಯಾರ್ “ಸಿರಾಜುಲ್ ಇಸ್ಲಾಂ” ಮದರಸದ SBS ವಿದ್ಯಾರ್ಥಿಗಳಿಂದ.. ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ಮಕ್ಕಳಿಗಾಗಿ ನಗದು ಹಾಗೂ ಪುಸ್ತಕವನ್ನು ಇತ್ತೀಚೆಗೆ ಸಂಗ್ರಹಿಸಲಾಯಿತು.
ರಾಜ್ಯದ ಹಲವಾರು ಭಾಗಗಳಲ್ಲಿ ಭೀಕರ ನೆರೆಯಿಂದಾಗಿ ಬೀದಿಪಾಲಾಗಿದ್ದ ಸಾವಿರಾರು ನಿರಾಶ್ರಿತರ ಕುಟುಂಬಗಳಿಗಾಗಿ ಸಹಾಯ ಹಸ್ತವನ್ನು ನೀಡುತ್ತಿರುವ ದಾನಿಗಳು, ಸಂಘ ಸಂಸ್ಥೆಗಳ ನಡುವೆ.. ಮದರಸದ ಈ ಪುಟ್ಟ ಮಕ್ಕಳಿಂದಲೇ ಮಕ್ಕಳಿಗಾಗಿ ನಡೆದ ಈ ಕಾರುಣ್ಯಸೇವೆಯು ಉತ್ತಮ ಬೆಳವಣಿಗೆಯಾಗಿದ್ದು, ಸಂಕಷ್ಟದಲ್ಲಿರುವ ಬಡ ಕಂದಮ್ಮಕ್ಕಳಿಗಾಗಿ..
ಮಕ್ಕಳಲ್ಲೇ ಇಂತಹ ಒಂದು ಉತ್ತಮ ಮನಸ್ಥಿತಿಯನ್ನು ನಿರೂಪಿಸಿ ಇದಕ್ಕೆ ಪ್ರೇರಣೆ ನೀಡಿದ ಬದ್ರಿಯಾ ಜುಮ್ಮಾ ಮಸೀದಿ ಬದ್ಯಾರಿನ ಉಸ್ತಾದರುಗಳಿಗೂ ಹಾಗೂ ಆಡಳಿತ ಸಮಿತಿಗೂ ಪ್ರಶಂಸೆಯ ಮಹಾಪೂರವೇ ಕಂಡುಬರುತ್ತಿದೆ. ಮಕ್ಕಳ ಈ ನಡೆಯು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ಸರ್ಕಾರವನ್ನು ತಲೆ ತಗ್ಗಿಸುವಂತೆ ಮಾಡಿದೆ.
ವರದಿ: ಆಸಿಫ್ ಬದ್ಯಾರ್
Thakabbalallha…