janadhvani

Kannada Online News Paper

ದಾರುಲ್ ಅಶರೀಯ ದುಬೈ ಸಮಿತಿ ವತಿಯಿಂದ ನಾಳೆ ಶರೀಅತ್ ಕಾಲೇಜ್ 3ನೇ ಸನದು ದಾನ ಸಮ್ಮೇಳನದ ಘೋಷಣಾ ಸಮಾವೇಶ

ದಾರುಲ್ ಅಶರೀಯ ದುಬೈ ಸಮಿತಿ ವತಿಯಿಂದ ಸೆಪ್ಟೆಂಬರ್ 13 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ 7 ಗಂಟೆಗೆ ಸರಿಯಾಗಿ ದೇರಾ ಕ್ರೀಕ್ ಪರ್ಲ್ ಹೋಟೆಲ್ ನಲ್ಲಿ ಅಶರೀಯಾ ಶರೀಅತ್ ಕಾಲೇಜ್ 3ನೇ ಸನದು ದಾನ ಸಮ್ಮೇಳನದ ಘೋಷಣಾ ಸಮಾವೇಶವು ಬಹು ಕುರ್ರತುಸ್ಸಾದತ್ ಫಝಲ್ ಕೋಯಮ್ಮ ತಂಗಳ್ ರವರ ನೇತ್ರತ್ವದಲ್ಲಿ ನಡೆಯಲಿರುವುದು.

ಮತ್ತು ದಾರುಲ್ ಅಶರೀಯಾ ಮ್ಯಾನೇಜರ್ ಬಹು ಮುಹಮ್ಮದ್ ಅಲಿ ಸಖಾಫಿ ಅವರಿಂದ ಮುಖ್ಯ ಪ್ರಭಾಷಣೆ ಮತ್ತು ಅಸಿಫ್ ಮತ್ತು ತಂಡದಿಂದ ಬುರ್ದಾ ಆಲಾಪನೆ ಹಾಗೂ ಬದರ್ ಮೌಲೂದ್ ಮಜಲಿಸ್ ಹಾಗೂ ಕೂರ ತಂಗಳ್ ರವರಿಂದ ವಿಶೇಷ ಪ್ರಾರ್ಥನೆ ಕೂಡಾ ನಡೆಯಲಿರುವುದೆಂದು.

ದುಬೈ ಸಮಿತಿ ಹಾಗೂ ಸ್ವಾಗತ ಸಮಿತಿಯಿಂದ ನಡೆದ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಸ್ವಾಗತ ಸಮಿತಿ ಚೇರ್ಮ್ಯಾನ್ ನಝೀರ್ ಹಾಜೀ ಕೆಮ್ಮಾರ ಹಾಗೂ ಜನರಲ್ ಕನ್ವಿನರ್ ಶೆರಿಫ್ ಬೊಲ್ಮಾರ್ ಮತ್ತು ರಾಷ್ಟ್ರೀಯ ಸಮಿತಿ ಜನರಲ್ ಸೆಕ್ರೆಟರಿ ಮೂಸಾ ಹಾಜೀ ಬಸರ ಹಾಗೂ ದುಬೈ ಸಮಿತಿ ಅಧ್ಯಕ್ಷ ಅಬ್ದುಲ್ಲ ಉಸ್ತಾದ್ ರವರು ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com