ಉಪ್ಪಿನಂಗಡಿ: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್ ಇದರ ಪ್ರಸ್ತುತ ವರ್ಷದ ಪ್ರಥಮ ರೇಂಜ್ ಕಾನ್ಫರೆನ್ಸ್ ಹಾಗೂ ಶರಫುಲ್ ಉಲಮಾ ಮಂಜನಾಡಿ ಅಬ್ಬಾಸ್ ಉಸ್ತಾದ್ ರವರ ಅನುಸ್ಮರಣೆ ಸಂಗಮ ಉಪ್ಪಿನಂಗಡಿ ರೇಂಜ್ ವ್ಯಾಪ್ತಿಯ ಕುದ್ಲುರು ಸಿರಾಜುಲ್ ಹುದಾ ಮದ್ರಸದಲ್ಲಿ ರೇಂಜ್ ಅಧ್ಯಕ್ಷ ಮುತ್ತಲಿಬ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುನ್ನೀ ಕೋ ಆರ್ಡಿನೇಶನ್ ಉಪ್ಪಿನಂಗಡಿ ವಳಯ ಅಧ್ಯಕ್ಷರಾದ ವಳವೂರು ಮುಹಮ್ಮದ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ SMA ರಾಜ್ಯ ಕಾರ್ಯದರ್ಶಿ ಅಶ್ರಫ್ ಸಖಾಫಿ ಮಾಡಾವು.ಅಬೂಬಕ್ಕರ್ ಸಅದಿ ಕುದ್ಲುರು.ಹಾರಿಸ್ ಸಖಾಫಿ ಕೆಮ್ಮಾರ.ಉಮರ್ ಕುಂಞಿ ಮುಸ್ಲಿಯಾರ್ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಡಿ ಹೆಚ್ ಇಬ್ರಾಹಿಂ ಸಅದಿ ನೆಕ್ಕಿಲಾಡಿ.ಹಂಝ ಮುಸ್ಲಿಯಾರ್ ವಳಾಲ್. ಉಸ್ಮಾನ್ ಸಅದಿ ಮೂಡಡ್ಕ. ಕುದ್ಲುರು ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ ಕುದ್ಲುರು ಹಾಗೂ ರೇಂಜ್ ವ್ಯಾಪ್ತಿಯ ಅಧ್ಯಾಪಕರು ಭಾಗವಹಿಸಿದರು ರೇಂಜ್ ಪ್ರ ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು ಸ್ವಾಗತಿಸಿ ಮುಹಮ್ಮದ್ ಸಖಾಫಿ ಬಾಜಾರು ವಂದಿಸಿದರು.