ಮಂಗಳೂರು: ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ನಿಧನದಿಂದ ತೆರವಾದ ಸುನ್ನೀ ಕೋ ಆರ್ಡಿನೇಶನ್ ಕಮಿಟಿ ಕರ್ನಾಟಕ ಇದರ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿಯಾಗಿರುವ ಮೌಲಾನಾ ಎಸ್. ಪಿ.ಹಂಝ ಸಖಾಫಿ ಬಂಟ್ವಾಳ್ ಅವರನ್ನು ಇಂದು ಮಂಗಳೂರಿನಲ್ಲಿ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಂಇಯ್ಯತುಲ್ ಉಲಮಾ ಮುಶಾವರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅನಂತರ ನೂತನ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋರ್ಡಿನೇಶನ್ ಸಭೆಯಲ್ಲಿ ಪ್ರಸಕ್ತ ಉಪಾಧ್ಯಕ್ಷರಾಗಿದ್ದ ಅವರ ಸ್ಥಾನಕ್ಕೆ ಸುನ್ನೀ ಎಜುಕೇಷನಲ್ ಡೆವಲಪ್ಮೆಂಟ್ ಕಮಿಟಿ ಆಫ್ ಕರ್ನಾಟಕ ಅಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ ಅವರನ್ನು ಆರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ ಸ್ವಾಗತಿಸಿ ಸಹ ಕಾರ್ಯದರ್ಶಿ ಅಶ್ರಫ್ ಕಿನಾರ ಧನ್ಯವಾದ ಸಲ್ಲಿಸಿದರು.