ದಾವಣಗೆರೆ: ಕರ್ನಾಟಕ ಮುಸ್ಲಿಂ ಜಮಾಅತ್ ದಾವಣಗೆರೆ ಜಿಲ್ಲಾ ಸಮಿತಿ ರಚನಾ ಸಮಾಲೋಚನಾ ಸಭೆ ರಾಜ್ಯ ಮುಸ್ಲಿಂ ಜಮಾತ್ ಪ್ರಧಾನ ಕಾರ್ಯದರ್ಶಿ ಎನ್ ಕೆಎಂ ಶಾಫೀ ಸಅದಿ ಅವರ ನೇತೃತ್ವದಲ್ಲಿ ನಗರದಲ್ಲಿ ನಡೆಯಿತು.
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಸ್ತಿತ್ವಕ್ಕೆ ಬರಲಿರುವ ಜಿಲ್ಲಾ ಸಮಿತಿಯ ಸಲಹಾ ಸಮಿತಿಯನ್ನು ಆಯ್ಕೆ ಮಾಡಲಾಯಿತು
ಅಧ್ಯಕ್ಷರಾಗಿ ಜನಾಬ್ ಸೈಯದ್ ಸೈಫುಲ್ಲಾ,ಪ್ರಧಾನ ಕಾರ್ಯದರ್ಶಿಯಾಗಿ ಖಾದರ್ ಬಾಶಾ ಅವರನ್ನು ಹಾಗೂ ವಿವಿಧ ತಾಲ್ಲೂಕುಗಳಿಂದ 21 ಮಂದಿ ಸದಸ್ಯರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಕೆಸಿಎಫ್ ಐಎನ್ ಸಿ ನಾಯಕ ರಹೀಮ್ ಸಅದಿ ಖತಾರ್, ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಸದಸ್ಯರು ಅಶ್ರಫ್ ಕಿನಾರ, ಇಹ್ಸಾನ್ ನಾಯಕ ಬಿ.ಎ.ಇಬ್ರಾಹಿಂ ಸಖಾಫಿ ದಾವಣಗೆರೆ, ದಾವಣಗೆರೆ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷರು ಕೆ.ಕೆ. ಅಶ್ರಫ್ ಸಖಾಫಿ, ಚಿತ್ರದುರ್ಗ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷರು ಎಮ್ಮೆಸ್ಸೆಂ ಜುನೈದ್ ಸಖಾಫಿ, ಹಾವೇರಿ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷರು ಯಾಸಿನ್ ಸಖಾಫಿ ಮೊದಲಾದವಾರು ಉಪಸ್ಥಿತರಿದ್ದರು.