janadhvani

Kannada Online News Paper

ಕೆ ಸಿ ಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಝಾಮಿ ಆಯ್ಕೆ

ಗಲ್ಫ್ ಕನ್ನಡಿಗರ ಅತೀದೊಡ್ಡ ಸಾಮಾಜಿಕ ವೇದಿಕೆಯಾದ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಯು ಎ ಇ ರಾಷ್ಟ್ರೀಯ ಸಮಿತಿ ವಾರ್ಷಿಕ ಮಹಾಸಭೆಯು ದಿನಾಂಕ‌ 05 07-2019 ನೇ ಶುಕ್ರವಾರ ಜುಮಾ ನಮಾಜಿನ ಬಳಿಕ ದುಬೈ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಹಿರಿಯ ವಿದ್ವಾಂಸರಾದ ಸಯ್ಯಿದ್ ತ್ವಾಹ ಭಾಪಖಿ ತಂಙಳ್ ದು:ಅ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು ವಾರ್ಷಿಕ ವರದಿ ವಾಚಿಸಿ, ಡಿವಿಷನ್ ವರದಿ ಗಳನ್ನು ಆಯಾ ವಿಭಾಗದ ಕಾರ್ಯದರ್ಶಿಗಳು ವಾಚಿಸಿದರು. ಕೋಶಾಧಿಕಾರಿ ಜಲೀಲ್ ನಿಝಾಮಿ ಎಮ್ಮೆಮಾಡು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೆ ಸಿ ಎ ಫ್ ಅಂತರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಪಿಎಂಎಚ್.ಈಶ್ವರಮಂಗಳ ಹಾಗೂ ಚುನಾವಣಾಧಿಕಾರಿಯಾಗಿ ಆಗಮಿಸಿದ ಅಂತಾರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬೊಳ್ಮಾರ್ ಒಮಾನ್ ರವರ ನೇತೃತ್ವದಲ್ಲಿ ಹಾಲೀ ಸಮಿತಿಯನ್ನು ಬರ್ಕಸ್ತು ಗೊಳಿಸಿ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು: ಅಬ್ದುಲ್ ಜಲೀಲ್ ನಿಝಾಮಿ
ಪ್ರ.ಕಾರ್ಯದರ್ಶಿ: ಮೂಸ ಹಾಜಿ ಬಸರ
ಕೋಶಾಧಿಕಾರಿ: ಇಬ್ರಾಹಿಮ್ ಬ್ರೈಟ್ ಮಾರ್ಬಲ್

ಸಂಘಟನಾ ವಿಭಾಗ:
ಅಧ್ಯಕ್ಷರು: ಇಕ್ಬಾಲ್ ಕಾಜೂರ್
ಕಾರ್ಯದರ್ಶಿ: ಕಲಂದರ್ ಕಬಕ

ಶಿಕ್ಷಣ ವಿಭಾಗ
ಅಧ್ಯಕ್ಷರು: ಇಬ್ರಾಹಿಮ್ ಸಖಾಫಿ ಕೆದುಂಬಾಡಿ
ಕಾರ್ಯದರ್ಶಿ: ಶಾಹುಲ್ ಹಮೀದ್ ಸಖಾಫಿ ಮಾದಾಪುರ

ವೆಲ್ಫೇರ್ ವಿಭಾಗ
ಅಧ್ಯಕ್ಷರು: ಝೈನುದ್ದೀನ್ ಹಾಜಿ ಬೆಳ್ಳಾರೆ
ಕಾರ್ಯದರ್ಶಿ: ಅಬ್ದುಲ್ ರಹೀಮ್ ಕೋಡಿ

ಆಡಳಿತ ವಿಭಾಗ
ಅಧ್ಯಕ್ಷರು: ಶಾಫೀ ಸಖಾಫಿ ಕೊಂಡಂಗೇರಿ
ಕಾರ್ಯದರ್ಶಿ: ರಫೀಕ್ ಕಲ್ಲಡ್ಕ

ಇಹ್ಸಾನ್ ವಿಭಾಗ
ಅಧ್ಯಕ್ಷರು: ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು
ಕಾರ್ಯದರ್ಶಿ: ಅಬ್ದುಲ್ ಖಾದರ್ ಸಅದಿ ಸುಳ್ಯ

ಪಬ್ಲಿಕೇಷನ್ ವಿಭಾಗ
ಅಧ್ಯಕ್ಷರು: ಅಬ್ದುಲ್ ಕರೀಮ್ ಮುಸ್ಲಿಯಾರ್ ಉರುವಾಲು ಪದವು
ಕಾರ್ಯದರ್ಶಿ: ಅಬ್ದುಲ್ ಹಕೀಮ್ ತುರ್ಕಳಿಕೆ.

ಕೆ ಸಿ ಎಫ್ ಅಂತಾರಾಷ್ಟ್ರೀಯ ನಾಯಕರ ನೇತ್ರತ್ವದಲ್ಲಿ ಹಳೆಯ ಸಮಿತಿಯಿಂದ ನೂತನ ಸಮಿತಿಗೆ ದಾಖಲೆ ಹಾಗೂ ಲೆಕ್ಕ ಪತ್ರಗಳನ್ನು ಹಸ್ತಾಂತರಿಸಲಾಯಿತು. ಝೈನುದ್ದೀನ್ ಹಾಜಿ ಬೆಳ್ಳಾರೆ ಸ್ವಾಗತಿಸಿ. ನೂತನ ಕಾರ್ಯದರ್ಶಿ ಹಾಜಿ ಮೂಸಾ ಬಸರ ಧನ್ಯವಾದಗಳನ್ನು ಅರ್ಪಿಸಿದರು.

error: Content is protected !! Not allowed copy content from janadhvani.com