janadhvani

Kannada Online News Paper

ಜಮ್ಮು ಕಾಶ್ಮೀರ: ಬಸ್ ಕಂದಕಕ್ಕೆ ಉರುಳಿ 33 ಮರಣ

ಕಿಸ್ತ್ವಾರ: ಜಮ್ಮು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಬಸ್‌ವೊಂದು ಕಂದಕಕ್ಕೆ ಉರುಳಿದಿದ್ದು, 33 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಬಸ್‌ ಕೇಶ್ವಾನದಿಂದ ಕಿಶ್ತ್ವಾರಕ್ಕೆ ಪ್ರಯಾಣಿಸುತ್ತಿತ್ತು. ಈ ವೇಳೆ ಗೊರ್ಗೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ ಎಂದು ಕಿಶ್ತ್ವಾರದ ಜಿಲ್ಲಾಧಿಕಾರಿ ಅಂಗ್ರೇಜ್‌ ಸಿಂಗ್‌ ರಾಣ ಅವರು ತಿಳಿಸಿದ್ದಾರೆ.

ಇನ್ನು ದುರ್ಘಟನೆ ಬಗ್ಗೆ ನ್ಯಾಷನಲ್‌ ಕಾನ್ಫರೆನ್ಸ್‌ನ ಮುಖ್ಯಸ್ಥ ಒಮರ್‌ ಅಬ್ದುಲ್ಲ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

error: Content is protected !! Not allowed copy content from janadhvani.com