ಪುತ್ತೂರು: ವಿಶ್ವ ಪರಿಸರ ದಿನದ ಅಂಗವಾಗಿ SSF ಪುತ್ತೂರು ಸೆಕ್ಟರ್ ವತಿಯಿಂದ ಸೆಕ್ಟರ್ ವ್ಯಾಪ್ತಿಯಲ್ಲಿ ಬರುವ ಪ್ರತೀ ಶಾಖೆಗಳಿಗೂ ವಿವಿಧ ತಳಿಗಳ 25 ಸಸಿಗಳನ್ನು ಹಾಗೆಯೆ MPM ವಿದ್ಯಾಲಯದ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ಒಂದೊಂದು ಗಿಡಗಳನ್ನು ಮುರ ಎಂ.ಪಿ.ಎಂ ವಿದ್ಯಾಲಯದಲ್ಲಿ ವಿತರಣೆ ಮಾಡಿ ಆಚರಿಸಲಾಯ್ತು.
ಈ ಸಸಿಗಳನ್ನು ಪ್ರತೀ ಶಾಖಾ ವ್ಯಾಪ್ತಿಯಲ್ಲಿ ಒಳಪಡುವ ಸ್ಥಳಗಳಲ್ಲಿ ನೆಟ್ಟು ಪರಿಸರ ದಿನವನ್ನು ಆಚರಿಸಬೇಕೆಂದು ಕೋರಲಾಯಿತು.
ಈ ಕಾರ್ಯಕ್ರಮವನ್ನು SSF ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಶಾಕಿರ್ ಹಾಜಿ ಅವರು ಜಿಲ್ಲಾ ವಕೀಲ ಸಂಘದ ಸಂಚಾಲಕರಾದ MP ಅಬೂಬಕರ್ ಅವರಿಗೆ ಸಸಿ ನೀಡುವ ಮೂಲಕ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ SSF ಪುತ್ತೂರು ಡಿವಿಷನ್ ಅಧ್ಯಕ್ಷರಾದ ಝುಬೈರ್ ಸಖಾಫಿ ಕುಂಬ್ರ,
SSF ಪುತ್ತೂರು ಸೆಕ್ಟರ್ ಅಧ್ಯಕ್ಷರಾದ ಸಲಾಂ ಹನೀಫಿ ಕಬಕ, SSF ಪುತ್ತೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಿಹಾಬ್’ರೆಹಮಾನ್ ಹಸನ್ ನಗರ,
SSF ಪುತ್ತೂರು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಂಜಿನಿಯರ್ ಶಫೀಕ್ ಸಅದಿ ಈಶ್ವರಮಂಗಲ , ಸೆಕ್ಟರ್ ಜೊತೆ ಕಾರ್ಯದರ್ಶಿ ಶರೀಫ್ ಹಸನ್ ನಗರ, SSF ಪುತ್ತೂರು ಟೌನ್ ಶಾಖೆಯ ಅಧ್ಯಕ್ಷರಾದ ಹೈದರ್ ಅಲಿ ಸಅದಿ ಕುಕ್ಕಿಲ, SSF ಪುತ್ತೂರು ಸೆಕ್ಟರ್ ನಾಯಕರಾದ ಖಾದರ್ ಸಖಾಫಿ ಹಸನ್ ನಗರ ಮತ್ತು ಸಿರಾಜ್ ಬೀಟಿಗೆ ಉಪಸ್ಥಿತರಿದ್ದರು