ಮಂಗಳೂರು.ಜೂನ್,4: ರಮದಾನ್ ತಿಂಗಳಲ್ಲಿ ಒಂದು ತಿಂಗಳ ನಿರಂತರ ಉಪವಾಸ ಕೈಗೊಂಡು, ಸಮಾಜದ ಬಡವರ ಜೀವನಶೈಲಿಯ ಬಗ್ಗೆ ಸ್ವತಹ: ಅನುಭವಿಸಿ ಇದೀಗ ಶಾಂತಿ ಸೌಹಾರ್ದತೆ, ಸಮಾನತೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ ಪವಿತ್ರ ಈದುಲ್ ಫಿತರ್ ಹಬ್ಬದ ಆಚರಣೆಯಲ್ಲಿರುವ ನಾಡಿನ ಎಲ್ಲಾ ಮುಸ್ಲಿಮರಿಗೂ ಶುಭಾಶಯಗಳು.
ಈದ್ ಸಂದೇಶವು ನಾಡಿನ ಎಲ್ಲೆಡೆಗೂ ಪಸರಿಸಲಿ, ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆನಿಲ್ಲಲಿ, ಹಬ್ಬದ ಸಂಭ್ರಮದಲ್ಲಿರುವ ಸರ್ವ ಮುಸ್ಲಿಂ ಬಾಂಧವರಿಗೆ ಈದ್ ಹಬ್ಬವು ಒಳಿತು ಹಾಗೂ ನೆಮ್ಮದಿಯನ್ನು ತರುವಂತಾಗಲಿ ಎಂದು ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡ ಶುಭ ಹಾರೈಸಿದೆ.