janadhvani

Kannada Online News Paper

ಬನ್ನೂರು:ಎಸ್ಸೆಸ್ಸೆಫ್,ಎಸ್ ವೈ ಎಸ್, ಜಿಸಿಸಿ ಸುನ್ನೀ ಫ್ರೆಂಡ್ಸ್ ವತಿಯಿಂದ ರಂಝಾನ್ ಕಿಟ್ ವಿತರಣೆ

ಪುತ್ತೂರು: ಬನ್ನೂರು ಎಸ್ಸೆಸ್ಸೆಫ್ ಎಸ್ ವೈ ಎಸ್ ಹಾಗೂ ಜಿಸಿಸಿ ಸುನ್ನೀ ಫ್ರೆಂಡ್ಸ್ ವತಿಯಿಂದ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ನಡೆಯಿತು.

ಮೊಹಲ್ಲಾದ 15 ಬಡ ಕುಟುಂಬಗಳನ್ನು ಆರಿಸಿ ರಂಝಾನ್ ತಿಂಗಳಲ್ಲಿ ನಿತ್ಯೋಪಗವಾಗುವಂತಹ ಸಾಮಾನುಗಳನ್ನು ಒಗ್ಗೂಡಿಸಿ ಕಿಟ್ ರೂಪದಲ್ಲಿ ವಿತರಿಸಲಾಯ್ತು.

ಈ ಸಂದರ್ಭದಲ್ಲಿ ಸಯ್ಯಿದ್ ಉಮ್ಮರ್ ತಂಙಳ್ ಬನ್ನೂರು, ಬಿ ಜೆ ಎಂ ಬನ್ನೂರು ಅಧ್ಯಕ್ಷರಾದ ಮೊಯಿದೀನ್ ಹಾಜಿ, ಸುನ್ನೀ ಸೆಂಟರ್ ಕಾರ್ಯನಿರ್ವಾಹಕ ಸಮಿತಿ ಪ್ರಧಾನ ಕಾರ್ಯದರ್ಶಿ ಹಮೀದ್ ಲಕ್ಕಿ ಸ್ಟಾರ್, ಎಸ್ ವೈ ಎಸ್ ಬನ್ನೂರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್, ಎಸ್ಸೆಸ್ಸೆಫ್ ಬನ್ನೂರು ಉಪಾಧ್ಯಕ್ಷರಾದ ಶಮೀರ್, ಎಸ್ ವೈ ಎಸ್ ಸದಸ್ಯರಾದ ಉಸ್ಮಾನ್ ಸಾಹೇಬ್, ಸಾದೀಕ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com