ಪ್ರತಿಷ್ಠಿತ ವಿದ್ಯಾಸಂಸ್ಥೆ ದಾರುಲ್ ಹುದಾ ಬೆಳ್ಳಾರೆ ಇದರ ಹಳೆ ವಿದ್ಯಾರ್ಥಿ ಸಂಘಟನೆಯಾದ ಅಲ್-ಹುದಾ ಇಸ್ಲಾಮಿಕ್ ವಿಂಗ್ ಆಫ್ ಅಲುಮ್ನಿ (AIWA) ಇದರ ವಾರ್ಷಿಕ ಮಹಾಸಭೆಯು ಕಳೆದ ಮೇ 1 ಮಂಗಳವಾರದಂದು ದಾರುಲ್ ಹುದಾ ಸಭಾಂಗಣದಲ್ಲಿ ಅಬ್ದುಲ್ಲಾ ಝುಹ್ರಿಯವರ ಅದ್ಯಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಸಾರಥಿ ಸಯ್ಯದ್ ಹಸನುಲ್ ಅಹ್ದಲ್ ತಂಙಲ್ ದುಆ ನಡೆಸಿ ಶುಭ ಹಾರೈಸಿದರು. ಬಶೀರ್ ಝುಹ್ರಿ ಮೊಗರ್ಪಣೆ ಸಭೆಯನ್ನು ಉದ್ಘಾಟಿಸಿದರು. ನಂತರ ನಡೆದ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಬಶೀರ್ ಝುಹ್ರಿ ಮೊಗರ್ಪಣೆ, ಉಪಾಧ್ಯಕ್ಷರಾಗಿ ಸಿದ್ದೀಕ್ ಸಅದಿ ಸಕಲೇಶಪುರ, ಹೈದರ್ ಸಅದಿ ಕುಕ್ಕಿಲ, ಕಾರ್ಯದರ್ಶಿ ಕಲಾಂ ಝುಹ್ರಿ ಬೆಳ್ಳಾರೆ, ಜೊತೆ ಕಾರ್ಯದರ್ಶಿ ಸಿದ್ದೀಕ್ ಅಹ್ಸನಿ ಸುಂಕದಕಟ್ಟೆ, ಕರೀಂ ಮುಸ್ಲಿಯಾರ್ ಕಟ್ಟತ್ತಾರ್, ಕೋಶಾಧಿಕಾರಿ ಸ್ವಾಲಿಹ್ ಜೌಹರಿ ಕುಂಬ್ರ, ಸದಸ್ಯರಾಗಿ ಸಲೀಂ ಝುಹ್ರಿ, ಅಬ್ದುಲ್ಲಾ ಝುಹ್ರಿ, ರಫೀಕ್ ಜೌಹರಿ, ಹಾರಿಸ್ ಸಅದಿ, ರಾಶೀದ್ ಅಹ್ಸನಿ, ಸಿರಾಜ್ ಸಅದಿ, ನೌಶಾದ್ ಬೆಳ್ಳಾರೆ, ಇರ್ಫಾನ್ ಎಣ್ಮೂರು, ಇರ್ಷಾದ್ ಬೆಳ್ಳಾರೆ, ಮಶೂದ್ ಬಂಟ್ವಾಳ, ಸಿನಾನ್ ಪುತ್ತೂರು, ಝುಬೈರ್ ನೆಲ್ಯಾಡಿ ಇವರನ್ನು ಆಯ್ಕೆ ಮಾಡಲಾಯಿತು. ಮೀಡಿಯಾ ಕನ್ವೀನರ್ ಗಳಾಗಿ ಸಿದ್ದೀಕ್ ಸಅದಿ ಎಣ್ಮೂರು, ಮುಸ್ತಫಾ ಖಾದ್ರಿ ಕಳಂಜ, ಆರ್ಗನೈಝರ್ ಗಳಾಗಿ ಅಲಿ ಜೌಹರಿ ಮರ್ದಾಳ, ಉಬೈದ್ ಮೊಗರ್ಪಣೆ, ಮನ್ಸೂರ್ ಮಾಲೆಂಗೇರಿ, ಝುಬೈರ್ ಕರಿಂಬಿಲ, ಯವರನ್ನೊಲಗೊಂಡ ನೂತನ ಸಮಿತಿಯು ರೂಪುಗೊಂಡಿತು. ಸಭೆಯನ್ನು ಸಿದ್ದೀಕ್ ಅಹ್ಸನಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.