janadhvani

Kannada Online News Paper

ಸಲಫಿ ಪ್ರಚಾರಕ ರಿಯಾಝ್ ನಿಗೆ ಐಎಸ್ ನಂಟು- ಬಂಧನ

ನವದೆಹಲಿ: ಶ್ರೀಲಂಕಾದಲ್ಲಿ ಐಎಸ್ಐಎಸ್ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಭಾರತ ಕಟ್ಟೆಚ್ಚರ ವಹಿಸಿದೆ. ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ ಸ್ಪೋಟ ನಡೆಸಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಸೋಮವಾರ ಕೇರಳದಿಂದ ಬಂಧಿಸಿದೆ.

ಬಂಧಿತ ಆರೋಪಿಯನ್ನು ರಿಯಾಝ್ ಅಬೂಬಕರ್(29) ಎಂದು ಗುರುತಿಸಲಾಗಿದ್ದು, ಕೇರಳದ ಪಾಲಕ್ಕಾಡ್ ಮೂಲದವನು ಎನ್ನಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಆತಂಕಕಾರಿ ಅಂಶವೊಂದನ್ನು ಬಹಿರಂಗಪಡಿಸಿರುವ ಆತ, ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದ ಸರಣಿ ಬಾಂಬ್ ದಾಳಿಯ ರೂವಾರಿಯಾಗಿದ್ದ ನ್ಯಾಷನಲ್ ತೌಹೀದ್ ಜಮಾತ್ ಎಂಬ ಸಲಫಿ ಸಂಘಟನೆಯ ನಾಯಕ ಝಹ್ರಾನ್ ಹಾಷಿಮ್ ನೀಡುತ್ತಿದ್ದ ಆದೇಶ ಹಾಗೂ ಅವರ ಭಾಷಣದ ವೀಡಿಯೋಗಳನ್ನು ತಾನು ಅನುಕರಿಸುತ್ತಿದ್ದಾಗಿ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕೇರಳದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾಗಿ ಹೇಳಿದ್ದಾನೆ.

ಇದೇ ಸಂದರ್ಭದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಅಬ್ದುಲ್ ರಶೀದ್ ಅಬ್ದುಲ್ಲಾ ಜೊತೆ ಸಂಪರ್ಕದಲ್ಲಿರುವುದಾಗಿ ಒಪ್ಪಿಕೊಂಡಿರುವ ರಿಯಾಝ್, ಆತನ ಆಡಿಯೋ ಕ್ಲಿಪ್ ಹಾಗೂ ವಿಡಿಯೋ ತುಣುಕುಗಳನ್ನ ನೋಡುತ್ತಿದ್ದೆ ಎಂದಿದ್ದಾನೆ. ಅಲ್ಲದೆ, ಸಿರಿಯಾದಲ್ಲಿದ್ದಾನೆ ಎನ್ನಲಾಗಿರುವ ಐಎಸ್ ಸಂಘಟನೆಯ ಶಂಕಿತ ಉಗ್ರ ಅಬ್ದುಲ್ ಖಯೂಮ್ ಅಲಿಯಾಸ್ ಅಬು ಖಾಲಿದ್ ಜೊತೆ ಆನ್ಲೈನ್ ಚಾಟ್ ಸಹ ಮಾಡಿರುವುದಾಗಿ ಹೇಳಿದ್ದಾನೆ.

ಅಲ್ಲದೆ, ಇವರು ಭಾರತದಲ್ಲಿ ದಾಳಿ ನಡೆಸಲು ಪ್ರೇರೇಪಿಸುವಂತಹ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕೇರಳದ ಕಾಸರಗೋಡು ಮತ್ತು ಪಾಲಕ್ಕಾಡ್ ನ ಮೂರು ಸ್ಥಳಗಳಲ್ಲಿ ಭಾನುವಾರ ಎನ್ಐಎ ಶೋಧ ನಡೆಸಿ ಶಂಕಿತ ಮೂವರನ್ನು ವಿಚಾರಣೆಗೆ ಕರೆದಿತ್ತು ಕಾಸರಗೋಡಿನ ಇಬ್ಬರಿಗೆ ಉಗ್ರ ಸಂಘಟನೆಯೊಂದಿಗ ಸಂಪರ್ಕವಿಲ್ಲ ಎಂದು ತನಿಖೆ ನಡೆಸಿದ ಎನ್ಐಎ ಹೇಳಿದೆ.

ಬಂಧಿತ ರಿಯಾಝ್ ತನ್ನ ಫೇಸ್ಬುಕ್ ಖಾತೆಯಲ್ಲಿ ಸುನ್ನೀ ಆಚಾರಗಳನ್ನು ಶಿರ್ಕ್ ಎನ್ನುತ್ತಾ ‘ಸಲಫಿಸಂ’ ಪ್ರಚಾರ ಪಡಿಸುತ್ತಿದ್ದ.

ಗೋರಿ ವಿಗ್ರಹವಾಗಿದೆ
ಸುನ್ನಿಗಳ ಆಚಾರ ಶಿರ್ಕ್

error: Content is protected !! Not allowed copy content from janadhvani.com