ಮಾಣಿ : ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಮಾಣಿ ಸೆಂಟರ್ ಇದರ ವತಿಯಿಂದ ರಮಳಾನ್ ಸಿದ್ದತಾ ಶಿಬಿರವು ಮೇ 1 ಬುಧವಾರ ಮಗ್ರಿಬ್ ನಮಾಝ್ ಬಳಿಕ ಮಾಣಿ ದಾರುಲ್ ಇರ್ಶಾದ್’ನಲ್ಲಿ ನಡೆಯಲಿದೆ.ಅಬ್ದುರ್ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು ಇವರ ಅಧ್ಯಕ್ಷತೆಯಲ್ಲಿ,ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸುವರು,ಮುಹಮ್ಮದಾಲಿ ಸಖಾಫಿ ದಾರುಲ್ ಅಶ್’ಅರಿಯ್ಯ ಶಿಬಿರ ನಡೆಸಿಕೊಡುವರು.
ಗಣ್ಯ ಅತಿಥಿಗಳಿಗಳಾಗಿ ಹಂಝ ಮದನಿ ಮಿತ್ತೂರು,ಕೆ ಬಿ ಖಾಸಿಂ ಹಾಜಿ ಪರ್ಲೊಟ್ಟು,ಅಬ್ದುರ್ರಶೀದ್ ಸಖಾಫಿ ಗಡಿಯಾರ್, ಅಬ್ದುಲ್ ಲತೀಫ್ ಮದನಿ ಕಲ್ಲಡ್ಕ,ಸುಲೈಮಾನ್ ಸೂರಿಕುಮೇರು,ಖಾಸಿಂ ಪಾಟ್ರಕೋಡಿ,ಇಬ್ರಾಹಿಂ ಹಾಜಿ ಶೇರಾ,ಯೂಸುಫ್ ಹಾಜಿ ಸೂರಿಕುಮೇರು,ಮುಂತಾದ ಹಲವಾರು ನೇತಾರರು ಭಾಗವಹಿಸಲಿರುವರು ಎಂದು ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.