ಒಮಾನ್: ಕೆಸಿಎಫ್ ಒಮಾನ್ ಬುರೈಮಿ ಝೋನ್ ಇದರ ಮಹಾಸಭೆಯು ಇತ್ತೀಚೆಗೆ ಅಧ್ಯಕ್ಷ ಮಜೀದ್ ಅಮಾನಿ ಇವರ ಅಧ್ಯಕ್ಷತೆಯಲ್ಲಿ ಹಮೀದ್ ನಿವಾಸದಲ್ಲಿ ಜರುಗಿತು.
ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಸೊಹಾರ್ ಝೋನ್ ಕೊಶಾಧಿಕಾರಿ ಇಕ್ಬಾಲ್ ಎರ್ಮಾಲ್, ರಾಷ್ಟ್ರೀಯ ಸಮಿತಿಯ ಸದಸ್ಯ ಹಾರಿಸ್ ಕೊಡಗು, ಮುಸ್ತಫಾ ಸಖಾಫಿ, ಸೊಹಾರ್ ಝೋನ್ ಅಧ್ಯಕ್ಷ ಆರಿಫ್ ಮದಕ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
2019 – 2021ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಅಮಾನಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಕುಕ್ಕಾಜೆ,ಕೊಶಾಧಿಕಾರಿಯಾಗಿ ಹಮೀದ್ ಸಾಲೆತ್ತೂರ್,ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಉಮ್ಮರ್ ಫಾರೂಕ್ ಕುಕ್ಕಾಜೆ, ಕನ್ವೀನರ್ ಅಬ್ದುಲ್ ಕಾದರ್ ಉಪ್ಪಿನಂಗಡಿ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ರಹಮಾನ್ ಕಂಬ್ಲಬೆಟ್ಟು, ಕನ್ವೀನರ್ ಕರೀಮ್ ಮಂಗಿಲಪದವು, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಅಶ್ರಫ್ ಕರೊಪಾಡಿ, ಕನ್ವೀನರ್ ಕಾಸಿಂ ಬಾಂಗಿಲ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಅಲಿ ಕರೊಪಾಡಿ , ಕನ್ವೀನರ್ ಆಗಿ ಹಂಝ ಸಾಲೆತ್ತೂರ್, ಎಡ್ಮಿನ್ ವಿಭಾಗದ ಅಧ್ಯಕ್ಷರಾಗಿ ಅಬೂಬಕ್ಕರ್ ಕಂಬ್ಲಬೆಟ್ಟು, ಕನ್ವೀನರ್ ರಫೀಕ್ ಮಾರಿಪಳ್ಳ, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಸಿದ್ದೀಕ್ ಕುಕ್ಕಾಜೆ, ಕನ್ವೀನರ್ ಅಬ್ದುಲ್ ಮಜೀದ್ ಕರೊಪಾಡಿ, ಸದಸ್ಯರಾಗಿ ಹಾರಿಸ್ ಮುಡಿಪು ಇವರುಗಳನ್ನು ಆಯ್ಕೆ ಮಾಡಲಾಯಿತು .
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಮಜೀದ್ ಅಮಾನಿ ಸ್ವಾಗತಿಸಿ ವಂದಸಿದರು.