ರಿಯಾದ್: ಕರ್ನಾಟಕ ಕಲ್ಚರಲ್ ಪೌಂಡೇಶನ್ (KCF) ರಿಯಾದ್ ಝೋನ್ ಅಧೀನದಲ್ಲಿರುವ ಗುರ್ನಾಥ ಸೆಕ್ಟರ್ ಇದರ ಮಹಾಸಭೆಯು ದಿನಾಂಕ 5/4/2019 ರಂದು ಗುರ್ನಾಥ ಕೆಸಿಎಫ್ ಸೆಂಟರ್ ನಲ್ಲಿ ಅಬ್ದುಲ್ಲಾ ಅಂಚಿನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನವಾಝ್ ಚಿಕ್ಕಮಗಳೂರು ಸ್ವಾಗತಿಸಿದ ಸಭೆಯನ್ನು ಉಬೈದ್ ಇಂದ್ರಾಜೆ ಕಿರಾಅತ್ ಪಠಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಿಯಾದ್ ಝೋನ್ ನಾಯಕರಾದ ಅಬ್ದುರಹ್ಮಾನ್ ಮದನಿ ನೆರವೇರಿಸಿದರು. ಬಳಿಕ ಪ್ರಧಾನ ಕಾರ್ಯದರ್ಶಿ ನಝೀರ್ ಕಕ್ಕಿಂಜೆ 2017-2019 ರ ಸಾಲಿನ ವರದಿ ಮತ್ತು ಲೆಕ್ಕ ಪತ್ರ ಮಂಡನೆಯನ್ನು ವಾಚಿಸಿದರು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ರೀ- ಆರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ರಿಯಾದ್ ಝೋನ್ ಕೋಶಾಧಿಕಾರಿ ಇಸ್ಮಾಯಿಲ್ ಕಣ್ಣಂಗಾರ್ ರವರ ನೇತೃತ್ವದಲ್ಲಿ ಹಳೆಯ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
2019-21 ರ ಸಾಲಿನ ನೂತನ ಸಾರಥಿಗಳು
ಅಧ್ಯಕ್ಷರಾಗಿ ಮುಹಮ್ಮದ್ ಹಾಜಿ ಸಿತಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕರ್ವೇಲ್, ಕೋಶಾಧಿಕಾರಿ ಅಬ್ಬಾಸ್ ಉರುವಲುಪದವು ನೇಮಕಗೊಂಡರು
ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಉಸ್ಮಾನ್ ಪಾಣೆಮಂಗಳೂರು, ಕಾರ್ಯದರ್ಶಿಯಾಗಿ ಸಾದಿಕ್ ಉಳ್ಳಾಲ, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಸಿ.ಎಚ್ ಅಬೂಬಕ್ಕರ್ ಮುಸ್ಲಿಯಾರ್ ಸೂರಿಂಜೆ, ಕಾರ್ಯದರ್ಶಿಯಾಗಿ ಫಾರೂಕ್ ಬೈರಿಕಟ್ಟೆ, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಸಫ್ವಾನ್ ಬಾಂಬಿಲ, ಕಾರ್ಯದರ್ಶಿಯಾಗಿ ಮುಸ್ತಾಕ್ ಉರುವಾಲು ಪದವು, ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ಲತೀಫ್ ಹಾಸನ, ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಕಕ್ಕಿಂಜೆ ಹಾಗೂ 9 ಮಂದಿ ಕಾರ್ಯಕಾರಿ ಸಮಿತಿ ಮತ್ತು 5 ಮಂದಿ ಝೋನ್ ಕೌನ್ಸಿಲರುಗನ್ನೊಳಗೊಂಡ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಕಾರ್ಯಕ್ರಮವನ್ನು ರಮೀಝ್ ಕುಲಾಹಿ ವಂದಿಸಿದರು.