janadhvani

Kannada Online News Paper

ವಯನಾಡ್: ಗಾಯಗೊಂಡ ಪತ್ರಕರ್ತರನ್ನು ಆ್ಯಂಬುಲೆನ್ಸ್​ವರೆಗೂ ಕರೆತಂದ ರಾಹುಲ್, ಪ್ರಿಯಾಂಕಾ

ವಯನಾಡ್ (ಕೇರಳ): ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರ ಬೃಹತ್​ ರೋಡ್​ ಶೋ ವೇಳೆ ಗಾಯಗೊಂಡ ಪತ್ರಕರ್ತರನ್ನು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಉಪಚರಿಸಿ, ಕಾರ್ಯಕ್ರಮದ ಸ್ಥಳದಿಂದ  ಆ್ಯಂಬುಲೆನ್ಸ್​ವರೆಗೂ ತಾವೇ ಸ್ವತಃ ಕರೆತರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಾಹುಲ್ ಗಾಂಧಿ ಅವರು ಇಂದು ಕೇರಳದ ವಯನಾಡ್​ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆ ಬಳಿಕ ವಯನಾಡ್​ನಲ್ಲಿ ಬೃಹತ್​ ರೋಡ್​ ಶೋ ಆಯೋಜಿಸಿದ್ದರು. ಈ ಎಲ್ಲ ಕಾರ್ಯಕ್ರಮಗಳನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರಲ್ಲಿ ಮೂವರು ಗಾಯಗೊಂಡು ಕುಸಿದುಬಿದ್ದರು. ಇದನ್ನು ನೋಡಿದ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸ್ವತಃ ತಾವೇ ವಾಹನದಿಂದ ಕೆಳಗೆ ಇಳಿದು, ಗಾಯಗೊಂಡ ಪತ್ರಕರ್ತರನ್ನು ಸ್ಟ್ರಚ್ಚರ್ ಮೇಲೆ ಮಲಗಿಸಿ, ಆ್ಯಂಬುಲೆನ್ಸ್​ವರೆಗೂ ಕರೆತಂದರು. ನಂತರ ಗಾಯಾಳು ಪತ್ರಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ವಯನಾಡಿನಲ್ಲಿ ನಾಮಪತ್ರ ಸಲ್ಲಿಕೆಗಾಗಿ ರಾಹುಲ್ ಗಾಂಧಿ ತಮ್ಮ ತಂಗಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಹೆಲಿಕಾಪ್ಟರ್​ನಲ್ಲಿ ಇಂದು ಬೆಳಗ್ಗೆ ಕೇರಳಕ್ಕೆ ಆಗಮಿಸಿದ್ದರು.  ನಾಮಪತ್ರ ಸಲ್ಲಿಸಿದ ಬಳಿಕ ಸಾವಿರಾರು ಮಂದಿ ಕಾರ್ಯಕರ್ತರೊಂದಿಗೆ ಬೃಹತ್​ ರೋಡ್​ ಶೋ ನಡೆಸಿದರು.

error: Content is protected !! Not allowed copy content from janadhvani.com