ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ರಿಯಾದ್ ಝೋನಿನ ಬದಿಯ ಸೆಕ್ಟರ್ ಅಧೀನದಲ್ಲಿ 4ನೇ ಶಾಖೆಯಾಗಿ ವಾದಿ ಲೆಬನ್ ಯುನಿಟ್ ಅಸ್ತಿತ್ವಕ್ಕೆ ತರಲಾಯಿತು.
ಕೆ.ಸಿ.ಎಫ್ ಬದಿಯ ಸೆಕ್ಟರ್ ಅಧ್ಯಕ್ಷರಾದ ಉಮ್ಮರ್ ಹಾಜಿ ಅಳಕೆಮಜಲ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಸ್ಸಲಾಂ ಸುಳ್ಯ, ಉಪಾಧ್ಯಕ್ಷರುಗಳಾಗಿ ಶಫೀಕ್ ಅಹ್ಸನಿ ಪಟ್ಲ, ಅಬ್ದುಲ್ ಕರೀಂ ಮುಸ್ಲಿಯಾರ್ ಕೊಡಗು, ಪ್ರಧಾನ ಕಾರ್ಯದರ್ಶಿ ನಝೀರ್ ಕೃಷ್ಣಾಪುರ, ಜತೆ ಕಾರ್ಯದರ್ಶಿಗಳಾಗಿ ಸಾದಿಕ್ ಸವನಾಲು, ಇರ್ಫಾನ್ ಕಾವಲ್ಕಟ್ಟೆ, ಕೋಷಾಧಿಕಾರಿಯಾಗಿ ಅಬ್ದುರ್ರಝ್ಝಾಕ್ ಪುತ್ತೂರು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಮೀರ್ ಕಲ್ಲಾಪು, ರಿಯಾ ನೆಲ್ಯಾಡಿ, ಸದಕತ್ ಸವನಾಲು, ಝುಬೈರ್ ಮೈಸೂರು, ಫಾರೂಕ್ ಬೋಂದೆಲ್, ಅಬ್ದುಲ್ ಶಮೀರ್ ಕೃಷ್ಣಾಪುರ, ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಗಳಾಗಿ ಕೆಸಿಎಫ್ ರಿಯಾದ್ ಝೋನಲ್ ನಾಯಕರಾದ ಫಾರೂಕ್ ಸಅದಿ, ನಿಝಾಂ ಸಾಗರ್ ರವರು ಆಗಮಿಸಿ ನೂತನ ಸಮಿತಿ ರಚಿಸಿ ಸಂಘಟನೆಯ ನೀತಿ ನಿಯಮ ಕುರಿತಂತೆ ಮಾಹಿತಿ ನೀಡಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತಂದರು. ಈ ಸಂದರ್ಭದಲ್ಲಿ ಕೆಸಿಎಫ್ ನಾಯಕರಾದ ಯೂಸುಫ್ ಕಳಂಜಿಬೈಳ್, ಸೆಕ್ಟರ್ ಪ್ರ,ಕಾರ್ಯದರ್ಶಿ ಮಜೀದ್ ವಿಟ್ಲ, ಹಮೀದ್ ಮುಲ್ಕಿ, ಶಫೀಕ್ ಮುಲ್ಕಿ ಮೊದಲಾದವರು ಉಪಸ್ಥಿತರಿದ್ದರು.
ಬಶೀರ್ ಮೂರುಗೋಳಿ ಸ್ವಾಗತಿಸಿ ರಿಯಾ ನೆಲ್ಯಾಡಿ ವಂದಿಸಿದರು.
ವರದಿ:ರಿಯಾ ನೆಲ್ಯಾಡಿ