janadhvani

Kannada Online News Paper

‘ನೈಸರ್ಗಿಕ ಭಯೋತ್ಪಾದನೆ’ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ದೂರು

ಕರಾಚಿ: ಭಾರತ ಪಾಕ್ ಮೇಲೆ ಬಾಂಬ್ ಹಾಕುವ ಮೂಲಕ ಮರ-ಗಿಡ ಹಾಗೂ ಪ್ರಾಣಿಗಳನ್ನು ಜೀವಕ್ಕೆ ಸಂಚಕಾರ ತಂದಿದೆ. ಈ ಮೂಲಕ ಭಾರತ ಪಾಕ್ ಮೇಲೆ ‘ನೈಸರ್ಗಿಕ ಭಯೋತ್ಪಾದನೆ’ ಎಸಗಿದೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಹವಾಮಾನ ಬದಲಾವಣೆ ಸಲಹೆಗಾರ ಮಲ್ಲಿಕ್ ಅಮೀನ್ ಅಸ್ಲಮ್ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಭಾರತ ಪಾಕ್ ನೆಲದಲ್ಲಿ ನಡೆಸಿದ ವಾಯು ದಾಳಿಯಿಂದಾಗಿ ಲಕ್ಷಾಂತರ ಮರಗಳು ಹಾನಿಗೊಳಗಾಗಿವೆ ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.ಭಾರತ ನಡೆಸಿದ ಈ ವಾಯು ದಾಳಿಯಿಂದಾಗಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಮರ ಹಾಗೂ ಪ್ರಾಣಿ-ಪಕ್ಷಿಗಳು ನಾಶವಾಗಿವೆ. ಇದು ನಿಸರ್ಗದ ಮೇಲೆ ನಡೆಸಿದ ಭಯೋತ್ಪಾದನೆ ಎಂದು ಅಸ್ಲಮ್ ದೂರಿದ್ದಾರೆ.

ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಕರ್ತರು ಭಾರತ ದಾಳಿ ನಡೆಸಿದ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ ಮತ್ತು ಅಲ್ಲಿ ಲಕ್ಷಾಂತರ ಮರಗಳಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗಿರುವುದನ್ನು ಕಣ್ಣಾರೆ ಕಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

error: Content is protected !! Not allowed copy content from janadhvani.com