janadhvani

Kannada Online News Paper

ಮಜ್ಲಿಸ್ ಎಜು ಪಾರ್ಕ್ ವತಿಯಿಂದ ನಿರ್ಮಿಸಲ್ಪಟ್ಟ ಮನೆಯ ಕೀ ಹಸ್ತಾಂತರ

ಮುಡಿಪು:ಸಯ್ಯಿದ್ ಮುಹಮ್ಮದ್ ಅಶ್ರಪ್ ಅಸ್ಸಖಾಪ್ ಮದನಿ ಅದೂರು ಇವರ ನೇತ್ರತ್ವದಲ್ಲಿ ಮುನ್ನಡೆಯುತ್ತಿರುವ ಮುಡಿಪು ಮಜ್ಲಿಸ್ ಎಜು ಪಾರ್ಕ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಕೇರಳದಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ಮನೆಯನ್ನು ಕಳೆದುಕೊಂಡ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿ ಅದರ ಕೀಯನ್ನು ಸಖಾಫಿಯ್ಯ ರಾತೀಬ್ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.

9ಮಂದಿಯನ್ನೊಳಗೊಂಡ ಈ ಕುಟುಂಬವು ತಂದೆಯನ್ನು ಕಳಕೊಂಡು 5 ಜನ ಮೂಕರಾದ ಮಕ್ಕಳನ್ನು ಹೊಂದಿರುತ್ತಾರೆ.
ಈ ಕಾರ್ಯಕ್ರಮಕ್ಕೆ ಅಗಮಿಸಿದ ಸಚಿವ ಯುಟಿ ಖಾದರ್ ಮಾತನಾಡಿ ಇದು ನೆರೆ ಪೀಡಿತ ಪ್ರದೇಶಕ್ಕೆ ನಿರ್ಮಿಸಿದ ಮೊದಲ ಮನೆಯಾಗಿದೆ ಎಂದು ಹೇಳಿ, ತಂಙಳ್‌ರ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ, ರಾಜಕೀಯ ನೇತಾರರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com