janadhvani

Kannada Online News Paper

ಹಿಂದ್ ಸಫರ್ : ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕರಿಗೆ ಸುಳ್ಯದಲ್ಲಿ ಭವ್ಯ ಸ್ವಾಗತ

ಫೆಬ್ರವರಿ 23, 24ರಂದು ಭಾರತದ ರಾಜಧಾನಿ ದೆಹಲಿಯಲ್ಲಿ ನಡೆಯುವ ಎಸ್ಸೆಸ್ಸೆಫ್ ನ್ಯಾಶನಲ್ ಕಾನ್ಫರೆನ್ಸ್ ಪ್ರಚಾರಾರ್ಥ ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಡಾ. ಶೌಕತ್ ಅಲಿ ನಈಮಿ ಅಲ್ ಬುಖಾರಿ ರವರ ನೇತೃತ್ವದಲ್ಲಿ ನಡೆಯುತ್ತಿರುವ ಹಿಂದ್ ಸಫರ್ ಭಾರತ ಯಾತ್ರೆಗೆ ಸುಳ್ಯದಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಫೆಬ್ರವರಿ 5ರಂದು ಪುತ್ತೂರಿನಲ್ಲಿ ಸ್ವೀಕರಣ ಕಾರ್ಯಕ್ರಮ ಮುಗಿಸಿ ರಾತ್ರಿ 11 ಗಂಟೆಗೆ ಸುಳ್ಯ ತಲುಪಿದ ರಾಷ್ಟ್ರೀಯ ಎಸ್ಸೆಸ್ಸೆಫ್ ನಾಯಕರಿಗೆ ಸುಳ್ಯ ಕೇಂದ್ರ ಜುಮಾ ಮಸೀದಿ ಮುಂಭಾಗದಲ್ಲಿ ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು. ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಡಾ. ಶೌಕತ್ ಅಲಿ ನಈಮಿ ಅಲ್ ಬುಖಾರಿ ಕಾಶ್ಮೀರ, ಪ್ರ. ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್, ಕೋಶಾಧಿಕಾರಿ ಝುಹೈರುದ್ದೀನ್ ನೂರಾನಿ ಪ.ಬಂಗಾಳ್, ಕ್ಯಾಂಪಸ್ ಕಾರ್ಯದರ್ಶಿ ಸಯ್ಯದ್ ಸಜ್ಜಾದ್ ಅಲಿ ಕಾಶ್ಮೀರ, ಉಪಾಧ್ಯಕ್ಷರಾದ ಸ್ವಾದಿಕ್ ಆಲಂ ಮಿಸ್ಬಾಹಿ ಆಸ್ಸಾಂ ಮುಂತಾದ ನಾಯಕರು ಉಪಸ್ಥಿತರಿದ್ದರು.

ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್.ಎಂ.ಎ ಸುಳ್ಯ ನ್ ಕೋಶಾಧಿಕಾರಿ ಮುಹ್ಯುದ್ದೀನ್ ಹಾಜಿ ಶಾಂತಿನಗರ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರ. ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕಿ ರವರ ನೇತೃತ್ವದಲ್ಲಿ ಹಿಂದ್ ಸಫರ್ ನಾಯಕರನ್ನು ಸ್ವೀಕರಿಸಲಾಯಿತು. ಎಸ್.ವೈ.ಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರು ತ್ರಿವರ್ಣ ಪತಾಕೆಯೊಂದಿಗೆ ನಾಯಕರನ್ನು ಸ್ವೀಕರಿಸಿದರು.

error: Content is protected !! Not allowed copy content from janadhvani.com