ಉಳ್ಳಾಲ: ಮದನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ ಇದರ ಮಹಾಸಭೆಯು ಜ. 30 ಬುಧವಾರ ಬೆಳಿಗ್ಗೆ10 ಕ್ಕೆ ಉಳ್ಳಾಲ ಮದನಿ ಹಾಲ್ ನಲ್ಲಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಮದನಿ ಖಾಝಿ ಕೃಷ್ಣಾಪುರ ಇವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖಸಿ) ರವರ ಪಾದಸ್ಪರ್ಶದಿಂದ ಪುನೀತಗೊಂಡ ಉಳ್ಳಾಲದಲ್ಲಿ, ಮರ್ಹೂಂ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ(ನ.ಮ) ತಂಙಳ್ ರವರ ಆಶಿರ್ವಾದದೊಂದಿಗೆ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಮದನಿ ಪದವಿ(ಬಿರುದು) ದಾರಿಗಳಾಗಿ ಹೊರಬಂದ ಮದನಿಗಳ ಅಧಿಕೃತ ಸಂಘಟನೆಯಾಗಿದೆ ಮದನೀಸ್ ಅಸೋಸಿಯೇಷನ್.
ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಕಾರ್ಯಕ್ರಮವನ್ನು ಉದ್ಘಾಟಿಸಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.